ಕೆಂಪೇಗೌಡ ಪ್ರಶಸ್ತಿ ಅಥವಾ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಷಿಕವಾಗಿ ನೀಡಲಾಗುವ ನಾಗರಿಕ ಪ್ರಶಸ್ತಿ. ಪ್ರಶಸ್ತಿ, ನಾಮನಿರ್ದೇಶನವು ವೈದ್ಯಕೀಯ, ಶಿಕ್ಷಣ, ಮಾಧ್ಯಮ, ಕ್ರೀಡಾ, ರಂಗಭೂಮಿ, ಚಲನಚಿತ್ರ, ಸಾಹಿತ್ಯ, ಪರಿಸರ, ಜಾನಪದ ಸಂಗೀತ, ಸಂಗೀತ, ನೃತ್ಯ, ಯೋಗಸಾನ, ನ್ಯಾಯಾಂಗ, ಪತ್ರಿಕೋದ್ಯಮ, ಸಂಸ್ಕೃತಿ, ಛಾಯಾಗ್ರಹಣ, ಸಾಮಾಜಿಕ ಸೇವೆ,ಜ್ಯೋತಿಷ್ಯ ಮತ್ತು ಚಿತ್ರಕಲೆ ಕ್ಷೇತ್ರದಲ್ಲಿ ನಾಗರಿಕರ ಗಮನಾರ್ಹ ಕೊಡುಗೆಗಳನ್ನು ಆಧರಿಸಿದೆ. == ಇತಿಹಾಸ == ವಿಜಯನಗರ ಸಾಮ್ರಾಜ್ಯದ ಆಡಳಿತಗಾರ, ನಾಡಪ್ರಭು ಹಿರಿಯ ಕೆಂಪೇಗೌಡರು 1537 ರಲ್ಲಿ ಬೆಂಗಳೂರಿನ ನಗರವನ್ನು ನಿರ್ಮಿಸಿದರು. ಈ ಪ್ರಶಸ್ತಿಯನ್ನು ಅವರ ಹೆಸರಿನಲ್ಲಿ ಕೆಂಪೇಗೌಡರ ಜನ್ಮದಿನದಂದು ನೀಡಲಾಗುತ್ತದೆ . ಪ್ರಶಸ್ತಿ ಪ್ರಸ್ತುತಿಯನ್ನು ತಾತ್ಕಾಲಿಕವಾಗಿ 2007 ರಲ್ಲಿ ವಿರಾಮಗೊಳಿಸಲಾಗಿತ್ತು , ನಾಲ್ಕು ವರ್ಷಗಳ ನಂತರ, 2011 ರಲ್ಲಿ ಇದನ್ನು ಪುನಃ ಪ್ರಾರಂಭಿಸಲಾಯಿತು. == ಉಲ್ಲೇಖಗಳು ==